Slide
Slide
Slide
previous arrow
next arrow

ಸೈಬರ್ ಕ್ರೈಂ: 14ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

300x250 AD

ಶಿರಸಿ: ಮೊಬೈಲ್’ಗೆ ಬಂದ ಲಿಂಕ್ ಮೂಲಕ ನೀಡಿದ ಮಾಹಿತಿಯಿಂದಾಗಿ ವ್ಯಕ್ತಿಯೋರ್ವ 14.69 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.

ಕಾರವಾರ ಮೂಲದ ಶಿರಸಿ ನಿವಾಸಿ ಶ್ರೀಹರ್ಷ ಶ್ರೀಪಾದ ಭುಜಲೇ ಎಂಬಾತನೇ ಮೋಸಕ್ಕೆ ಬಲಿಯಾದ ವ್ಯಕ್ತಿಯಾಗಿದ್ದು, ಆತನ ಮೊಬೈಲ್’ಗೆ ಬಂದ ಮೆಸೇಜ್ ಲಿಂಕ್ ಒತ್ತಿ, ಮಾಹಿತಿ ನೀಡಿ, ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿದ್ದಾನೆ.

300x250 AD

ಹಣ ಕಳೆದುಕೊಂಡ ತಕ್ಷಣ ಈತ ಪೋಲಿಸರಿಗೆ ವಿಷಯ ತಿಳಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಡಿವೈಎಸ್ಸ್ಪಿ ಗಣೇಶ ಕೆ ಎಲ್, ಸಿಪಿಆಯ್ ರಾಮಚಂದ್ರ ನಾಯಕ್ ಹಾಗು ಪಿಎಸ್ಆಯ್ ಗಳಾದ ರಾಜಕುಮಾರ ಉಕ್ಕಲಿ ಮತ್ತು ಮಾಂತಪ್ಪ ಕುಂಬಾರ ಹಾಗು ಸಿಬ್ಬಂದಿಗಳು ತನಿಖೆ ನಡೆಸಿ ಕಳೆದುಕೊಂಡವನ ಖಾತೆಗೆ ಒಟ್ಟೂ ಹಣ ಜಮಾ ಆಗುವಂತೆ ಮಾಡಲು ಯಶಸ್ವಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top